Slide
Slide
Slide
previous arrow
next arrow

ಶಿರಸಿ ಅರ್ಬನ್ ಬ್ಯಾಂಕ್ ನಿರ್ದೇಶಕ ಟಿ.ಎಸ್. ಬಾಲಮಣಿಗೆ ಸನ್ಮಾನ

300x250 AD

ದಾಂಡೇಲಿ : ಶಿರಸಿ ಅರ್ಬನ್ ಬ್ಯಾಂಕಿನ ದಾಂಡೇಲಿ, ಬೆಂಗಳೂರು, ಹಾಗೂ ಹುಬ್ಬಳ್ಳಿ ವಿಭಾಗದಿಂದ ಅವಿರೋಧವಾಗಿ ಆಯ್ಕೆಯಾದ ನಗರದ ಉದ್ಯಮಿ ಹಾಗೂ ಬಿಜೆಪಿ ಮುಖಂಡರಾದ ಟಿ. ಎಸ್. ಬಾಲಮಣಿ ಅವರನ್ನು ನಗರದ ಗೆಳೆಯರ ಬಳಗದವರು ಸನ್ಮಾನಿಸಿ ಗೌರವಿಸಿದರು.

ಬಾಲಮಣಿಯವರಿಗೆ ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಿದ ಜಿಲ್ಲಾ ಕಸಾಪ ಅಧ್ಯಕ್ಷ ಬಿ. ಎನ್. ವಾಸರೆ ಹಲವು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಬಾಲಮಣಿಯವರು ಬ್ಯಾಂಕಿನ ನಿರ್ದೇಶಕರಾಗಿ ಸತತ ನಾಲ್ಕು ಬಾರಿ ಆಯ್ಕೆ ಆಗಿರುವುದು ನಿಜಕ್ಕೂ ದಾಖಲೆಯಾಗಿದೆ. ತಮ್ಮ ಅವಧಿಯಲ್ಲಿ ಇವರು ಅನೇಕರಿಗೆ ಬ್ಯಾಂಕಿನ ಮೂಲಕ ಸಹಾಯ ನೀಡಿರುವುದು ಕೂಡ ಶ್ಲಾಘನಾರ್ಹ ಎಂದರು.

300x250 AD

ಪ್ರಾಸ್ತಾವಿಕವಾಗಿ ಮಾತನಾಡಿದ ಯುವಜನ ಮುಖಂಡ ಡಿ. ಸ್ಯಾಮಸನ್ ಟಿ.ಎಸ್. ಬಾಲಮಣಿಯವರು ಶಿರಸಿ ಅರ್ಬನ್ ಬ್ಯಾಂಕಿನ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿರುವುದು ನಮಗೆಲ್ಲರಿಗೂ ಅಭಿಮಾನದ ಸಂಗತಿ. ಅವರ ಅವಧಿಯಲ್ಲಿ ಬ್ಯಾಂಕು ಇನ್ನು ಹೆಚ್ಚು ಪ್ರಗತಿಯನ್ನು ಕಾಣಲಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಗೆಳೆಯರ ಬಳಗದ ಪ್ರಶಾಂತ್ ಶೆಟ್ಟಿ, ಮುಸ್ತಾಕ್ ಶೇಖ್, ಪ್ರವೀಣ್ ಜನ್ನು, ಕೀರ್ತಿ ಗಾಂವಕರ, ಮೋಹನ್ ಹಲವಾಯಿ, ಮೌಲಾಲಿ ಮುಲ್ಲಾ, ದಶರಥ ಬಂಡಿವಡ್ಡರ, ರವೀಂದ್ರ ಷಾ, ಸಂತೋಷ್ ಕುಡ್ತರಕರ, ಶಶಿ ಓಶಿಮಠ, ಬಾಲು ಗವಸ್, ಹ್ಯಾರಿಸ್, ಅಬ್ದುಲ್ ರಜಾಕ್, ಚಪ್ಪರಬಂದ ಮೊದಲಾದವರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top